ಮುಕ್ತಾಯ

ರೇಷ್ಮೆ ಇಲಾಖೆ

ಇಲಾಖೆ ಸ್ಥಾಪನೆಯ ಘನೋದ್ದೇಶ

ಹಿಪ್ಪನೀರಳೆ ಕೃಷಿ

ಮೈಸೂರು ರೇಷ್ಮೆಯ ತಾಯ್ನಾಡು ಕರ್ನಾಟಕ, ರೇಷ್ಮೆಗೆ 215 ವರ್ಷಗಳ ಸುಧೀರ್ಘ ಇತಿಹಾಸವಿದೆ. 1785 ರಲ್ಲಿ ಟಿಪ್ಪು ಸುಲ್ತಾನ ಅವಧಿಯಲ್ಲಿ ರೇಷ್ಮೆ ಉದ್ಯಮವು ಚನ್ನಪಟ್ಟದಲ್ಲಿ ಅಸ್ಥಿತ್ವಕ್ಕೆ ಬಂದಿದೆ ಎಂಬ ಉಲ್ಲೇಖಿವಿದೆ. ಚನ್ನಪಟ್ಟಣದ ಸಿಲ್ಕ್ ಫಾರಂನಲ್ಲಿ ಆರಂಭದಿಂದಲೂ ರೇಷ್ಮೆ ಬೀಜೋತ್ಪಾದನೆ ಹಾಗೂ ಬೀಜೋತ್ಪಾದನೆಗೆ ಸಂಬಂಧಿಸಿದ ಪ್ರಯೋಗಗಳು ಮುಂದುವರೆದಿದ್ದವು.

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಅವಧಿಯಲ್ಲಿ ಸ್ಥಾಪಿತವಾದ ಕೆಲವೇ ಇಲಾಖೆಗಳಲ್ಲಿ ರೇಷ್ಮೆ ಇಲಾಖೆಯು ಒಂದು ಹಾಗೂ 1914 ರಲ್ಲಿ ಸ್ವತಂತ್ರ ಇಲಾಖೆಯಾಗಿ ರೇಷ್ಮೆ ಇಲಾಖೆಯು ಅಸ್ಥಿತ್ವಕ್ಕೆ ಬಂದಿದೆ.

ಇಲಾಖೆಯು ನಾಲ್ವಡಿ ಕೃಷ್ಣರಾಜಒಡೆಯರ್ ರವರ ಕಾಲದಲ್ಲಿ ಸರ್.ಎಂ. ವಿಶ್ವೇಶ್ವರಯ್ಯರವರ ಮಾರ್ಗದರ್ಶನದಲ್ಲಿ ತನ್ನ ಉನ್ನತಿಯನ್ನು ಪಡೆದುಕೊಂಡಿತು.

 

ಇಲಾಖೆಯ ಉದ್ದೇಶಗಳು

  • ಹೆಚ್ಚು ಇಳುವರಿ ನೀಡುವ ಹೊಸ ತಳಿ ಹಿಪ್ಪುನೇರಳೆ ವಿಸ್ತೀರ್ಣವನ್ನು ಅಭಿವೃದ್ಧಿಪಡಿಸುವುದು.
  • ಸೊಪ್ಪಿನ ಉತ್ಪಾದನೆ, ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು.
  • ಗೂಡಿನ ಉತ್ಪಾದನೆ, ಉತ್ಪಾದಕತೆ ಹಾಗೂ ಗುಣಮಟ್ಟವನ್ನು ಹೆಚ್ಚಿಸುವುದು.
  • ಹೆಚ್ಚಿನ ಪ್ರಮಾಣದ ಉತ್ತಮ ಗುಣಮಟ್ಟದ ಅಂದರೆ ಅಂತರಾಷ್ಟ್ರೀಯ ಗುಣಮಟ್ಟದ ಕಚ್ಫಾ ರೇಷ್ಮೆಯನ್ನು ಉತ್ಪಾದಿಸುವುದು.
  • ರೈತರ ಆರ್ಥಿಕ ಮಟ್ಟವನ್ನು ಉತ್ತಮಪಡಿಸುವುದು.

 

</ br>

ಜಿಲ್ಲಾ ಕಛೇರಿ:

ಉಪ ನಿರ್ದೇಶಕರು

</ br>
ರೇಷ್ಮೆ ಇಲಾಖೆ</ br>

# 932,1ನೇ ಮುಖ್ಯ ರಸ್ತೆ</ br>

ಲಕ್ಷ್ಮಿ ಪುರಂ</ br>

ಮೈಸೂರು-570001</ br>

ದೂರವಾಣಿ ಸಂಖ್ಯೆ: 0821-2334004</ br>

 

ಸಂಬಂಧಿತ ಅಂತರ್ಜಾಲಪುಟಗಳು </ br>

https://www.karnataka.gov.in/Sericulture/Pages/home.aspx

</ br>